Tuesday 27 January, 2009

ಅದಾಗಿ ಬರದಿರಲಿ....

"ಹನ್ನೆರಡು ವರ್ಷಗಳ ಕಾಲ ಸತತ ಯಾಗ ಮಾಡಿದವನಿಗಿಂತ ಒಮ್ಮೆಯೂ ಸಿಟ್ಟು ಮಾಡದವ ಶ್ರೇಷ್ಠ" ಎನ್ನುತ್ತದೆ ಮಹಾಭಾರತ.ಕೋಪವೊಂದಿಲ್ಲದಿರೆ ಮನಸ್ಸು ಅಸೀಮ ಶಾಂತಿಯ ಸರೋವರವಾಗಿರುತ್ತದೆ.ಮನವೆಂಬ ಮಾನಸ ಸರೋವರದ ನಿಶ್ಚಲತೆಯನ್ನು ಭಂಗಗೊಳಿಸಿ, ಅದನ್ನು ಅಲ್ಲೋಲಕಲ್ಲೋಲಗೊಳಿಸಲು ಕ್ಷಣಮಾತ್ರದ ಕೋಪವೆಂಬ ಕಲ್ಲು ಸಾಕು.ಮನದ ನಿಶ್ಚಲತೆಯೆಂದರೆ ಅದು ಅಧ್ಯಾತ್ಮದ ಉನ್ನತಿ ; ದೈವಿಕದ ಭವ್ಯತೆ ; ಭೌತಿಕದ ಬಂಗಾರ ; ಬುದ್ಧಿಯ ವಿಜಯ. ಹಾಗಿರುವಾಗ ಮನದ ನಿಶ್ಚಲತೆಯನ್ನು ಹಾಳುಮಾಡಿಕೊಳ್ಳದಿರುವುದು ಅಪೇಕ್ಷಣೀಯ. ಕೋಪ ಅದನ್ನು ಭಗ್ನಗೊಳಿಸುತ್ತದೆ ಎಂದಾದರೆ ಅದು ನಮಗೇಕೆ ಬೇಕು? ಕೋಪವೇ ಇಲದ ಬದುಕನ್ನು ಆಶಿಸೋಣ. ಕೋಪವೇ ಬೇಡವೆಂದಲ್ಲ. ನಾವಾಗಿ ಬೇಕಾದಾಗ ತರಿಸಿಕೊಳ್ಳೋಣ ; ಅದಾಗಿ ಬರುವುದು ಬೇಡ.

No comments: