Saturday 30 June, 2012

'ಚುರುಕು-ಚಾವಡಿ' 2 ಚಟ್ಟನೆ ಕೇಳಿದ್ದು..? ತಟ್ಟನೆ ಹೇಳಿದ್ದು..!


ಸಂಪಜ ಎಂದರೆ?
              ಅಯ್ಯೋ ಹೆಸರಿನಲ್ಲೇನಿದೆ, ಬಿಡಿ..!

ಹುಟ್ಟಿನ ಗುಟ್ಟು...  
             ಜನ್ಮಾಂತರದ ಪಾಪದ ರಟ್ಟು...

ಮಾನವ ಜನ್ಮ ದೊಡ್ಡದೇಕೆ?    
             ತಪ್ಪಿನ ಅರಿವಾಗುವುದಕ್ಕೆ...

ಸಂಸಾರದ ಹುಚ್ಚು ಬಿಡಲು...     
             ಸಂಸಾರ ಹೆಚ್ಚು ಎಂಬುದ ಬಿಡಬೇಕು...

ಮೋಕ್ಷಕ್ಕೆ ಹೆದ್ದಾರಿ...   
             ಬಂಧನವ ಅರಿ...

ದುಡ್ಡು ದೊಡ್ಡಪ್ಪ..  ಚಿಕ್ಕಪ್ಪ
             ಅದರೊಂದಿಗೆ ಬರುವ ಭೋಗ...

ಅರಿವೇತಕೆ ಬೇಕು?  
               ಅರಿವಲ್ಲದ್ದ ಅರಿಯಲಿಕೆ...

ಮನಕೆ ನಿಲ್ದಾಣ...      
               ಮನದ ಆರಂಭ...

ಒಲವಿಗೂ ನಲಿವಿಗೂ ವೈರುಧ್ಯವೇಕೆ?      
               ಅಪಾತ್ರದಲ್ಲಿ ಇಡುವುದರಿಂದ...

ಸಾಯುವುದೇ ಆದರೆ ಹುಟ್ಟು ಏತಕೆ?  
               ಹೌದು! ಸಾಯುತ್ತೇವೆ, ಎಂದೇ ಹುಟ್ಟದಿರೋಣ...

ಲೋಕದಿ ಸೊಬಗಾವುದು?     
               ಹೆಣ್ಣು, ಹೊನ್ನು, ಮಣ್ಣು...

ದಾಸರು 'ಹುಚ್ಚಪ್ಪಗಳಿರಾ' ಎಂದದ್ದು ಯಾರಿಗೆ?      
                 ದೊಡ್ಡದ್ದನ್ನು ಸಣ್ಣದ್ದಾಗಿಸಿಕೊಂಡವರಿಗೆ...

ಜಗತ್ತಿನ ಮತ್ತಿಗೆ ಕಾರಣ?  
                 ಸೊತ್ತಿನ ಅರಿವಾಗದಿರುವುದು...

ಮಹಿಳೆಯರ ವಸ್ತ್ರತ್ಯಾಗವೂ ತ್ಯಾಗವಲ್ಲವೇ?  
                 ಹೌದು! ಮಾನ - ಮರ್ಯಾದೆಯ...

(ಧರ್ಮಭಾರತಿಯ ನನ್ನ ಅಂಕಣ)

Thursday 28 June, 2012

ಚುರುಕು-ಚಾವಡಿ ೧ ಚಟ್ಟನೆ ಕೇಳಿದ್ದು..? ತಟ್ಟನೆ ಹೇಳಿದ್ದು..!!


ಅಹಂ ಉಳಿದರೆ...
               ಪರಂ ಇಲ್ಲ.

ದೇವರಿಗೆ ಬೇಕಾದದ್ದು...
               ಏನೂ ಬೇಡದಂತಾಗುವುದು.

ನನಗೆ ಗೊತ್ತಿಲ್ಲ ಎಂಬುದು....
              ಗೊತ್ತಾಗುವಿಕೆಯ ಲಕ್ಷಣ.

ಪೂಜೆಯ ಫಲ...
              ಪೂಜೆ ಮಾಡದಂತಾಗುವುದು.

ಸಂಘವಿರುವುದು...
              ನಿಸ್ಸಂಗನಾಗಿಸಲು.

ರಾಮ ನಾಮದಿಂದ...
              ಮಾರ ನಾಮಾವಶೇಷ.

ಸಾತ್ತ್ವಿಕನಾಗಲು ಬೇಕಾದದ್ದು...
              ರಾಜಸ - ತಾಮಸ.

(ಧರ್ಮಭಾರತಿಯ ನನ್ನ ಅಂಕಣ)



Wednesday 27 June, 2012

'ಚುರುಕು-ಚಾವಡಿ' - ಚಟ್ಟನೆ ಕೇಳಿದ್ದು..? ತಟ್ಟನೆ ಹೇಳಿದ್ದು..!


ಯೋಗವೆಂದರೇನು?
                       ಜೀವ-ದೇವರ ಸಂಗಮ...

ನಿಜವಾದ ಸುಖ ಯಾವುದು?
                       ಯಾವುದರಲ್ಲಿ ದುಃಖದ ಲವಲೇಶವೂ ಇಲ್ಲವೋ ಅದು...

ಎಲ್ಲರೂ ನಮ್ಮನ್ನು ಇಷ್ಟಪಡುವಂತಾಗಲು ಏನು ಮಾಡಬೇಕು?
                       ನಾವು ಎಲ್ಲರನ್ನೂ ಇಷ್ಟಪಡಬೇಕು...

ಯೋಚಿಸಲು ಹತ್ತು ತಲೆಯಿದ್ದರೂ ರಾವಣ ವಿಫಲನಾಗಿದ್ದೇಕೆ?
                       ಬೇರೆ ತಲೆಯನ್ನು ಉರುಳಿಸಲು ಹೊರಟಿದ್ದಕ್ಕೆ...

ಕಷ್ಟ ಕಾಲದಲ್ಲಿ ಕಾಪಾಡುವುದು ಯಾವುದು?
                      ಹಿಂದೆ ಮಾಡಿದ ಒಳ್ಳೆಯ ಕೆಲಸ...

ಶ್ರೀರಾಮ ವಾಲಿಯನ್ನು ಮರೆಯಲ್ಲಿ ನಿಂತು ಕೊಂದಿದ್ದು ಸರಿಯೇ?
                     ಸರಿಯೇ... ಯಾಕೆಂದರೆ ಅದು ಯುದ್ಧವಲ್ಲ, ಅಪರಾಧಿಗೆ ನೀಡಿದ ಶಿಕ್ಷೆ...

ಬದುಕಿನ ಗುರಿಯೇನು?
                      ತನ್ನನ್ನು ಪರಿಚಯಿಸಿಕೊಳ್ಳುವುದು...

(ಧರ್ಮಭಾರತಿಯ ನನ್ನ ಅಂಕಣ)