ಯೋಗವೆಂದರೇನು?
ಜೀವ-ದೇವರ ಸಂಗಮ...
ನಿಜವಾದ ಸುಖ ಯಾವುದು?
ಯಾವುದರಲ್ಲಿ ದುಃಖದ ಲವಲೇಶವೂ ಇಲ್ಲವೋ ಅದು...
ಎಲ್ಲರೂ ನಮ್ಮನ್ನು ಇಷ್ಟಪಡುವಂತಾಗಲು ಏನು ಮಾಡಬೇಕು?
ನಾವು ಎಲ್ಲರನ್ನೂ ಇಷ್ಟಪಡಬೇಕು...
ಯೋಚಿಸಲು ಹತ್ತು ತಲೆಯಿದ್ದರೂ ರಾವಣ ವಿಫಲನಾಗಿದ್ದೇಕೆ?
ಬೇರೆ ತಲೆಯನ್ನು ಉರುಳಿಸಲು ಹೊರಟಿದ್ದಕ್ಕೆ...
ಕಷ್ಟ ಕಾಲದಲ್ಲಿ ಕಾಪಾಡುವುದು ಯಾವುದು?
ಹಿಂದೆ ಮಾಡಿದ ಒಳ್ಳೆಯ ಕೆಲಸ...
ಶ್ರೀರಾಮ ವಾಲಿಯನ್ನು ಮರೆಯಲ್ಲಿ ನಿಂತು ಕೊಂದಿದ್ದು ಸರಿಯೇ?
ಸರಿಯೇ... ಯಾಕೆಂದರೆ ಅದು ಯುದ್ಧವಲ್ಲ, ಅಪರಾಧಿಗೆ ನೀಡಿದ ಶಿಕ್ಷೆ...
ಬದುಕಿನ ಗುರಿಯೇನು?
ತನ್ನನ್ನು ಪರಿಚಯಿಸಿಕೊಳ್ಳುವುದು...
(ಧರ್ಮಭಾರತಿಯ ನನ್ನ ಅಂಕಣ)
No comments:
Post a Comment