Thursday 28 June, 2012

ಚುರುಕು-ಚಾವಡಿ ೧ ಚಟ್ಟನೆ ಕೇಳಿದ್ದು..? ತಟ್ಟನೆ ಹೇಳಿದ್ದು..!!


ಅಹಂ ಉಳಿದರೆ...
               ಪರಂ ಇಲ್ಲ.

ದೇವರಿಗೆ ಬೇಕಾದದ್ದು...
               ಏನೂ ಬೇಡದಂತಾಗುವುದು.

ನನಗೆ ಗೊತ್ತಿಲ್ಲ ಎಂಬುದು....
              ಗೊತ್ತಾಗುವಿಕೆಯ ಲಕ್ಷಣ.

ಪೂಜೆಯ ಫಲ...
              ಪೂಜೆ ಮಾಡದಂತಾಗುವುದು.

ಸಂಘವಿರುವುದು...
              ನಿಸ್ಸಂಗನಾಗಿಸಲು.

ರಾಮ ನಾಮದಿಂದ...
              ಮಾರ ನಾಮಾವಶೇಷ.

ಸಾತ್ತ್ವಿಕನಾಗಲು ಬೇಕಾದದ್ದು...
              ರಾಜಸ - ತಾಮಸ.

(ಧರ್ಮಭಾರತಿಯ ನನ್ನ ಅಂಕಣ)



No comments: