Thursday 23 October, 2008

ಮನುಭಾಷಿತ - 5

ವ್ಯಕ್ತಿತ್ವ ವಿಕಸನಕ್ಕೆ ಮನುಸ್ಮೃತಿಯ ಕೊಡುಗೆ
(ಧರ್ಮಭಾರತಿಯ ಅಂಕಣ ಬರಹ)


ಸೃಷ್ಟಿಯಲ್ಲೇಕೆ ತಾರತಮ್ಯ?
ಒಬ್ಬ ಸಿರಿವಂತ ; ಮತ್ತೊಬ್ಬ ಬಡವ.
ಪ್ರತಿಭಾಶಾಲಿಯೊಬ್ಬ ; ಅಪ್ರತಿಭನೊಬ್ಬ.
ಲೇಖಕನೊಂದು ಕಡೆ ; ಅಕ್ಷರವನ್ನೇ ಗುರುತಿಸದವ ಇನ್ನೊಂದು ಕಡೆ.
ಓರ್ವನಿಗೆ ಉದ್ಯಮದ ಸೌಭಾಗ್ಯ ; ಕೂಲಿಯ ದೌರ್ಭಾಗ್ಯಕ್ಕೆ ಹೆಗಲು ಇನ್ನೋರ್ವನದು.
ಸೌಂದರ್ಯದ ಅಧಿರಾಣಿಯ ವಿಲಾಸ ಒಂದು ಕಡೆ ; ಕುರೂಪಿಯ ಬವಣೆ ಇನ್ನೊಂದು ಕಡೆ.
ಆಲದ ಮರ ; ಕೊತ್ತುಂಬರಿ ಗಿಡ.
ಆನೆ ; ಇರುವೆ.
ಹುಲಿ ; ಕುರಿ.
....................ಹೀಗೆ ಸೃಷ್ಟಿ, ಮೇಲುಕೀಳಿನ ಸಂತೆ.

ಹೀಗೇಕೆ? ಎಲ್ಲವೂ ಸಮವಾಗಿಲ್ಲ ಏಕೆ? ಕೆಲವರು ಮಾತ್ರ ಹಾಡಬಲ್ಲರೇಕೆ? ಕೆಲವರು ಮಾತ್ರ ಅಭಿನಯಿಸಬಲ್ಲರೇಕೆ? ಕೆಲವರು ಮಾತ್ರ ವಾಗ್ಮಿಗಳಾಗುವುದು ಏಕೆ? ಸಮಾನತೆಯ ಕೂಗನ್ನು ಅಂಬರಕ್ಕೆ ತಲುಪುವಂತೆ ಮಾಡಿದರೂ ಈ ಅಸಮಾನತೆ ಬದಲಾಗದು.

ಇದಕ್ಕೆ ಉತ್ತರವಿರುವುದು ಭಾರತೀಯರ ಕರ್ಮಸಿದ್ಧಾಂತದಲ್ಲಿ. ಬದುಕಿನ ಎಲ್ಲದರ ಕಾರಣ ಮನದ ಯೋಚನೆ, ಭಾವಾಭಿವ್ಯಕ್ತಿಯ ಮಾತು, ನಮ್ಮೆಲ್ಲ ಕ್ರಿಯೆಗಳು.

ಸೃಷ್ಟಿಯ ಭಿನ್ನತೆಗೆ ಕಾರಣ ಇವುಗಳೇ. ಯೋಚನೆ - ಮಾತು - ಕ್ರಿಯೆಗಳಿಂದ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳು. ಒಳ್ಳೆಯದರಿಂದ ಒಳಿತು, ಕೆಟ್ಟದರಿಂದ ಕೆಡುಕು. ಇದನ್ನೇ ಮನು ಹೀಗೆನ್ನುತಾನೆ :

ಶುಭಾಶುಭಫಲಂ ಕರ್ಮ ಮನೋವಾಗ್ದೇಹ ಸಂಭವಮ್ |
ಕರ್ಮಜಾ ಗತಯೋ ನೄಣಾಮುತ್ತಮಾಧಮಮಧ್ಯಮಾಃ ||

ಮನಸ್ಸು - ಮಾತು - ದೇಹಗಳಿಂದ ಮಾಡುವ ಒಳ್ಳೆಯ ಕೆಟ್ಟ ಕರ್ಮಗಳಿಂದಾಗಿ ಜೀವಿಯ ಉತ್ತಮ - ಮಧ್ಯಮ - ಅಧಮ ಜೀವನ ನಿರ್ಣಯವಾಗುತ್ತದೆ.

ಇದು ಮನುವಿನ ಆಶಯ ; ಸನಾತನ ಧರ್ಮದ ಹೃದಯ.

1 comment:

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

thumaaaaaaaaaaaane santosha aaytu sharmaji
adbhuthavada bharaha asaadarana bhashe
nimma baravaNige ellarigu sigali
hagondistu vishaya nammannu talupali.
nimma baravanigeyalli gahanavaada vishaya saralavaagi mudi baruttade
navu dhanyaru


nimma aksharaakamkshi