Saturday 31 January, 2009

ಅವನಿಗೊಪ್ಪುವ ನಡೆ - ನುಡಿ

ಜಗತ್ತಿಗೆ ಈಶನಾದ ಅವನೇ ನಮೆಲ್ಲರ ಅಪ್ಪ. ಅವನ ಅಡಿಗೆ ಬಾಗುವುದೇ ಜೀವಿಯ ಸೌಜನ್ಯ. ಅವನೇ ನಾಥನಿರುವಾಗ ಅನಾಥರಾರು? ಎಲ್ಲರು ಸನಾಥರೇ. ನಮೆಲ್ಲರ ಅಪ್ಪನಿಗೆ ಬೇಸರ ಉಂಟುಮಾಡದಿರುವುದೇ ಮಕ್ಕಳಾದ ನಮ್ಮೆಲ್ಲರ ಜೀವನ ವ್ರತವಾಗಬೇಕು. ಅವನಿಗೆ ಬೇಸರವಾಗುವುದು ಯಾವಾಗ? ಅವನ ಅಭಿಪ್ರಾಯಕ್ಕೆ ವಿರುದ್ಧವಾಗಿ ವರ್ತಿಸಿದಾಗ. ಸೃಷ್ಟಿ ಅವನದು. ಹಾಗಾಗಿ ಸೃಷ್ಟಿಯ ಕುರಿತಾದ ನಮ್ಮ ಧೋರಣೆಗಳು ಅವನೂ ಒಪ್ಪುವಂತಿರಬೇಕು. ಸೃಷ್ಟಿಯ ಬಳಕೆ ಅವನ ಅನುಮತಿಯಂತಿರಬೇಕು. ಅವನಿಗೆ ಸಂತಸವಾಗುವುದು ಈ ಎರಡನ್ನು ಒಪ್ಪಿಕೊಂಡಾಗ. ಅವನ ಮನ ಒಪ್ಪುವಂತೆ ನುಡಿಯಿರಲಿ ; ನಡೆಯಿರಲಿ.

No comments: