Wednesday 25 June, 2008

ಮುಸ್ಲಿಂ - ರವಿ ಬೆಳೆಗೆರೆ - ಧರ್ಮ

'' ಮುಸ್ಲಿಂ'' ಬಹುದಿನದಿಂದ ಕೇಳುತ್ತಿದ್ದ ಹೆಸರು. 'ರವಿ ಬೆಳಗೆರೆ' ಬರೆದಿದ್ದಾರೆ ಅಂತ ಕೇಳಿದ್ದೆ. ಅಲ್ಲಿ ಇಲ್ಲಿ ಚೂರು ಪಾರು ವಿಮರ್ಶೆಯನ್ನೂ ಕೇಳಿದ ನೆನಪಿನ ತುಣುಕು.

ಗುರುಕುಲದ ಗ್ರಂಥಧಾಮದಲ್ಲಿ ಇಣುಕುತ್ತಿದ್ದಾಗ ಪುಸ್ತಕ ಕಣ್ಣಿಗೆ ಬಿತ್ತು. ಓದಲೇಬೇಕೆಂದು ಮನಸ್ಸು ಮಾಡಿ ಓದತೊಡಗಿದೆ.

ನಮಗೆ ಗೊತ್ತಿರದ- ಗೊತ್ತಿರಲೇಬೇಕಾದ ಮಾಹಿತಿಗಳ ಮಹಾಪೂರ. ಇಂತದ್ದೊಂದು ಕ್ರೂರ ಜಗತ್ತು ಹೊರಗಿದೆ ಅನ್ನೋದೇ ಗೊತ್ತಿರಲಿಲ್ಲ.

ಮೊನ್ನೆ ಬಾಳಠಾಕ್ರೆಯವರ ಹೇಳಿಕೆಯೊಂದು ವಿವಾದದ ರೂಪ ತಾಳಿತ್ತು- 'ಹಿಂದೂ ಆತ್ಮಹತ್ಯಾದಳಗಳು ಬೇಕು' ಅಂತ.
" ಮುಸ್ಲಿಂ" ಓದಿದಾಗ, ಭಾರತದ ಮುಸ್ಲಿಮರು 'ಜೆಹಾದ್'ನ ಕೈಯಲ್ಲಿ ಸಿಕ್ಕರೆ; ಮುಂದೊಂದು ದಿನ ಠಾಕ್ರೆ ಹೇಳಿದಂತೆ ಮಾಡಬೇಕೇನೋ ಅನ್ನಿಸುತ್ತದೆ.

ಕ್ರಿಶ್ಚಿಯನ್ನರ 'ಮತಾಂತರ'-ಮುಸ್ಲಿಂರ 'ಜೆಹಾದ್'ಗಳು ಧರ್ಮ ಎನ್ನುವ ಹೆಸರಿನಡಿಯಲ್ಲಿಯೇ ಬಂದು ಬಂದು ನಾವಿವತ್ತು ಸನಾತನ ಧರ್ಮವನ್ನೂ ಸಂಶಯದಿಂದ ನೋಡುವಂತಾಗಿದೆ.

ನಾವೆಲ್ಲ ಧಾರ್ಮಿಕರೆನಿಸಿಕೊಂಡವರು ಏನು ಹೇಳಿದರೂ ಅದರಲ್ಲಿ 'ಮತಾಂತರ-ಜೆಹಾದ್'ನ ಕ್ರೌರ್ಯದ ಅಂಶಗಳನ್ನು ಜಗತ್ತು ಹುಡುಕತೊಡಗುತ್ತದೆ.

ಹಿಂದೂಧರ್ಮದ ಪ್ರಚಾರಕರೂ-ಪ್ರತಿಪಾದಕರೂ ಕೆಲವು ಬಾರಿ ಆಡುವ ಮಾತುಗಳು, ತೋರುವ ವರ್ತನೆಗಳು, ಅಭಿಮಾನವಿದ್ದರೂ ಅರಿವಿಲ್ಲದಿರುವುದರಿಂದ ಹಾಗಿರುವುದೂ ಸುಳ್ಳಲ್ಲ.

ಜಗತ್ತಿನ ಒಳಿತೊಂದನ್ನೇ ಹಾರೈಸುವ ಸನಾತನ ಧರ್ಮವನ್ನು ಇಂತಹ ಸಂದರ್ಭದಲ್ಲಿ ಮೂಲದ ಆಶಯದೊಂದಿಗೆ ಜಗದ ಮುಂದಿಡುವುದು ಹೇಗೇನೋ?

ಏನೇ ಇರಲಿ, ' ಮುಸ್ಲಿಂ' ಎಲ್ಲರೂ ಓದಬೇಕಾದ ಹೊತ್ತಗೆ.

No comments: